Monday, June 13, 2011

ಯಕ್ಷಗಾನ ಅಕಾಡೆಮಿ ಪುಸ್ತಕ ಪುರಸ್ಕಾರ ಪ್ರದಾನ

ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಇವರ 'ಸಾಮಗ ಪಡಿದನಿ', ಡಾ.ಪ್ರಭಾಕರ ಶಿಶಿಲರ 'ಮತ್ಸ್ಯಗಂಧಿ' ಮತ್ತು ಡಾ. ಶಾಂತಾ ಇಮ್ರಾಪುರ ಅವರ ಅಲ್ಲಮ ಕೃತಿಗಳಿಗೆ ಈ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುರಸ್ಕಾರ ಪ್ರಾಪ್ತವಾಗಿದ್ದು, ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಜರುಗಿದ 'ಯಕ್ಷಗಾನ ಕಲಾವಿದರ ಪುನಶ್ಚೇತನ ಶಿಬಿರ'ದ ಸಮಾರೋಪ ಸಮಾರಂಭದಲ್ಲಿ 'ಪುಸ್ತಕ ಪುರಸ್ಕಾರ' ಪ್ರದಾನ ಮಾಡಲಾಯಿತು.

ಅಕಾಡೆಮಿಯ ಅಧ್ಯಕ್ಷ ಕುಂಬಳೆ ಸುಂದರ ರಾವ್ ಇವರ ಆಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿಯವರು ಪುರಸ್ಕಾರ ಪ್ರದಾನ ಮಾಡಿದರು.

ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೂಚುಪುಡಿ ನೃತ್ಯ ವಿದುಷಿ ವೈಜಯಂತಿ ಕಾಶಿ, ಅಕಾಡೆಮಿಯ ರಿಜಿಸ್ಟ್ರಾರ್ ಮಹಾದೇವಯ್ಯ, ಯಕ್ಷಗುರುಗಳಾದ ಸಂಜೀವ ಸುವರ್ಣ, ಕರ್ಗಲ್ಲು ವಿಶ್ವೇಶ್ವರ ಭಟ್, ಉಡುಪಿ ಕಲಾರಂಗದ ಮುರಳಿ ಕಡೆಕಾರ್ ಉಪಸ್ಥಿತರಿದ್ದರು.