Thursday, April 26, 2012

ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’



ಬಂಟ್ವಾಳ ತಾಲೂಕು ವೀರಕಂಭ ಸನಿಹದ ಸಿಂಗೇರಿತೋಟ ’ದೇವಿಕಾ’ ಮನೆಯಲ್ಲಿ ಶ್ರೀಮತಿ ಸಂಗೀತಾ-ಗಣೇಶ ಮಯ್ಯರ ಪುತ್ರ ಚಿ.ಆದಿತ್ಯಾ ಜಿ.ಯಸ್. ಇವನಿಗೆ ಉಪನಯನ. ಅಪರಾಹ್ನ ಖ್ಯಾತ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ’ಭೀಷ್ಮ ಪರ್ವ’ ಪ್ರಸಂಗದ ತಾಳಮದ್ದಳೆ. ರಾತ್ರಿ ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’ ಪ್ರಸಂಗದ ಬಯಲಾಟ. ಸಿಡಿಮದ್ದು-ಬ್ಯಾಂಡ್ ಇಲ್ಲದೇ ಇದ್ದುದರಿಂದ ನಿಜವಾದ ’ಯಕ್ಷಗಾನ’ವನ್ನು ಸವಿದ ಅನುಭವ. ಭಾಗವತರಾದ ಪುರುಷೋತ್ತಮ ಪೂಂಜರ ’ಒಂದನೇ ಸೆಟ್’ ಆಟವನ್ನು ನಡೆಸಿಕೊಟ್ಟಿದ್ದರು. ಇಂದು (ಎಪ್ರಿಲ್ ೨೫) ಪೂಂಜರ ಭಾಗವತಿಕೆ ಸೂಪರ್!