Monday, July 30, 2012

ಯಕ್ಷಸುದ್ದಿ

* ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಈ ಸಾಲಿನ 'ಸಾಮಗ ಪ್ರಶಸ್ತಿ'ಗೆ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಆಯ್ಕೆಯಾಗಿದ್ದಾರೆ. ಕುಡ್ಲದ ಡಾನ್ ಬಾಸ್ಕೋ ಸಭಾಭವನದಲ್ಲಿ ಆಗಸ್ಟ್ 1 ರಂದು ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ತೆಂಕುತಿಟ್ಟಿನ ಪೂರ್ವರಂಗ (ಸಭಾಲಕ್ಷಣ ಸಹಿತ) ಪಾರಂಪರಿಕ ಪ್ರದರ್ಶನ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ 'ಹಿಡಿಂಬಾ ವಿವಾಹ-ಗರುಡ ಗರ್ವಭಂಗ' ಪ್ರದರ್ಶನ ನಡೆಯಲಿದೆ.

* ಹಿರಿಯ ಕಲಾವಿದ ಬೇತಕುಂಞ್ಞ ಕುಲಾಲರಿಗೆ ಈ ಸಾಲಿನ ದೋಗ್ರಪೂಜಾರಿ ಪ್ರಶಸ್ತಿ. ನಾಲ್ಕು ದಶಕಗಳ ಕಾಲ ಮೂಲ್ಕಿ, ಕುತ್ಯಾಳ, ಸೌಕೂರು, ಕುಂಡಾವು, ಕೊಲ್ಲೂರು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ.. ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ ಕುಲಾಲರಿಗೆ ಆಗಸ್ಟ್ 1 ರಂದು ಸಂಜೆ ಪುರಭವದಲ್ಲಿ ಪ್ರಶಸ್ತಿ ಪ್ರದಾನ.

ವರದಿ

* ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ ಹದಿನೈದನೇ ವರುಷದ 'ಯಕ್ಷಾಂತರಂಗ' ಕಾರ್ಯಕ್ರಮದ ಸಮಾರೋಪ ಸಮಾರಂಭವು ನಿನ್ನೆ (ಜುಲೈ 29) ಮೂಡಬಿದಿರೆ ಸಮಾಜ ಮಂದಿರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ ಮತ್ತು ವೇಷಧಾರಿ ಸಂಪಾಜೆ ಶೀನಪ್ಪ ರೈಯವರನ್ನು ಸಂಮಾನಿಸಲಾಯಿತು.

* ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ ವೇದಿಕೆ ಮತ್ತು ಕಣಿಪುರ ಮಾಸಪತ್ರಿಕೆಯ ಆಶ್ರಯದಲ್ಲಿ ಆರನೇ ವರುಷದ 'ಶೇಣಿ ಸಮ್ಮಾನ್' ಸಮಾರಂಭವರು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜುಲೈ 29ರಂದು ಜರುಗಿತು. ಹಿರಿಯ ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ಇವರಿಗೆ ಸಾಲಿನ ಶೇಣಿ ಸಮ್ಮಾನ್ ಪ್ರಶಸ್ತಿ' ನೀಡಿ ಗೌರವಿಸಲಾಯಿತು.