Tuesday, July 15, 2014

ಅಪೂರ್ವ ಅನುಭವ.

           2009-2010 ಇರಬೇಕು, ಎಡನೀರು ಶ್ರೀಮಠದಲ್ಲಿ ಪಾತಾಳ ಯಕ್ಷ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣ. ಪ್ರಸಂಗ : ದಮಯಂತಿ ಪುನರ್ ಸ್ವಯಂವರ. ಪರಮಪೂಜ್ಯ ಎಡನೀರು ಶ್ರೀಗಳ ಭಾಗವತಿಕೆ. ಕೀರ್ತಿಶೇಷ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ. ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆ.
        ಪೆರುವಡಿ ನಾರಾಯಣ ಹಾಸ್ಯಗಾರರ 'ಬಾಹುಕ.'   ಹಿರಿಯ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ’ದಮಯಂತಿ’ಪಾತ್ರದಲ್ಲಿ 
        ಅವರ ಜತೆಪಾತ್ರ 'ಚೇದಿರಾಣಿ'ಯಾಗಿ ಭಾಗವಹಿಸುವ ಅವಕಾಶ ನನಗೆ ಪ್ರಾಪ್ತವಾಗಿತ್ತು.
          ಅದೊಂದು ಅಪೂರ್ವ ಅನುಭವ.

Tuesday, July 8, 2014

ಒಮ್ಮೊಮ್ಮೆ ಹೀಗಾಗುತ್ತೆ...!


        ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ 'ಮಹಿಷ ವಧೆ' ಕಥಾನಕ. ಪುತ್ತೂರು ಸನಿಹದ ಪದಾಳದಲ್ಲಿ ಜರುಗಿದ ಆಟ.