
ದಕ್ಷಾಧ್ವರ ಪ್ರಂಗದ `ಬ್ರಾಹಣ', ನಳದಮಯಂತಿ ಪ್ರಸಂಗದ `ಬಾಹುಕ', ಪಾರಿಜಾತದ `ಮಕರಂದ', ಕೃಷ್ಣಲೀಲೆ-ಕಂಸವಧೆ ಪ್ರಸಂಗದ `ಪಂಡಿತ ಮತ್ತು ಅಗಸ',ಕೊಕ್ಕೆಚಿಕ್ಕನ ಹಾಸ್ಯ, ಗುಹ, ಸಾರಥಿ, ದೇವಲೋಕದ ದೂತ, ಬೇಟೆಗಾರರು, ಹನುಮನಾಯಕ, ಪರಾಕು ಹಾಸ್ಯ, ಬೈರಾಗಿ, ಪಾಪಣ್ಣ....ಯಕ್ಷಲೋಕದ ಎಲ್ಲಾ ಪಾತ್ರಗಳು ಪೆರುವೋಡಿಯವರಲ್ಲಿ ಮರುಹುಟ್ಟು ಪಡೆದಿದೆ.
ಯಕ್ಷಗಾನದ `ರಾಜಾ ಹಾಸ್ಯ' ಎಂಬ ನೆಗಳ್ತೆಗೆ ಪಾತ್ರರಾಗಿ, `ಪಾಪಣ್ಣ ಭಟ್ರು' ಎಂದೇ ಜನಪ್ರಿಯ. ತನ್ನ ಯಜಮಾನಿಕೆಯ ಮೂಲ್ಕಿ ಮೇಳದಲ್ಲಿ ಪಾದೆಕಲ್ಲು ವೆಂಕಟ್ರಮಣ ಭಟ್ಟರ ಯಕ್ಷಗಾನ ಪ್ರಸಂಗ `ಪಾಪಣ್ಣ ವಿಜಯ - ಗುಣಸುಂದರಿ' ಪ್ರಸಂಗದ ಪ್ರದರ್ಶನದ ವಿಜೃಂಬಣೆ. ಇದರಿಂದ ತನಗೂ, ಜತೆ ಕಲಾವಿದರಿಗೂ ಸಾರ್ವತ್ರಿಕ ಮನ್ನಣೆ, ಗೌರವ. ಮುಂದೆ ಸುರತ್ಕಲ್ ಮೇಳದಲ್ಲಿ `ಟೆಂಟ್ ಫುಲ್' ಮಾಡಿದ ಈ ಪ್ರಸಂಗ ಇಂದಿಗೂ ಜನಪ್ರಿಯ.
ರಂಗದಲ್ಲಿ ಅವರ ಅಭಿನಯ, ನಡೆನುಡಿಗಳಲ್ಲಿ ಹಾಸ್ಯ ಉನ್ನತ ಮಟ್ಟದಲ್ಲಿರುತ್ತಿತ್ತು. ಹಾಸ್ಯಕ್ಕಾಗಿ ಕೆಳಮಟ್ಟದಲ್ಲಿ ವರ್ತಿಸುವ ಹಾಸ್ಯವಲ್ಲ ಅಭಿನಯದಲ್ಲಿ ಸಹಜತೆ, ಅರ್ಥಗಾರಿಕೆಯಲ್ಲಿ ಪಾತ್ರೌಚಿತ್ರ....ಗಳನ್ನು ಸದಾ ಕಾಪಾಡಿಕೊಂಡು ಬಂದ, ಒಬ್ಬ ಅಭಿಜಾತ ಹಾಸ್ಯಗಾರ. ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ `ಯಕ್ಷಗಾನ ಸಿನಿಮಾ' ಒಂದರಲ್ಲಿ ಕಲಾವಿದನಾಗಿ ಭಾಗವಹಿಸಿದ್ದರು.
ಶೇಣಿ ದತ್ತಿ ಪುರಸ್ಕಾರ, ಕುರಿಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಕರ್ಗಲ್ಲು ಸುಬ್ಬಣ್ಣ ಭಟ್ ಪ್ರಶಸ್ತಿ, ಪಾತಾಳ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳನ್ನು ಪಡೆದ ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' ಕೃತಿ ಪ್ರಕಟವಾಗಿದೆ.(ಲೇಖಕ : ನಾ. ಕಾರಂತ ಪೆರಾಜೆ). ಪುತ್ತೂರಿನ ಕರ್ನಾಟಕ ಸಂಘವು ಇದನ್ನು ಪ್ರಕಟಿಸಿದೆ.
ಪ್ರಶಸ್ತಿ ಪುರಸ್ಕೃತ ಪೆರುವೋಡಿಯವರಿಗೆ ಅಭಿನಂದನೆಗಳು.
ಅರ್ಹರಿಗೆ ಕೊನೆಗೂ ಪ್ರಶಸ್ತಿ ಸ೦ದಿರುವುದು ಅಭಿನ೦ದನೀಯ.ಸಕಾಲಿಕವಾಗಿ ವಿಷಯವನ್ನು ತಿಳಿಸಿದ ನಿಮಗೂ ಅಭಿನ೦ದನೆಗಳು
ReplyDelete