Saturday, December 27, 2014

yaksha chinthane - ಯಕ್ಷ ಚಿಂತನೆ

ಪುತ್ತೂರು (ದ.ಕ.ಜಿಲ್ಲೆ) ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 46ನೇ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ದಶಮಾನೋತ್ಸವ ಸಮಾರಂಭ ದಶಂಬರ 25ರಂದು ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಜರುಗಿದ 'ಯಕ್ಷ ಚಿಂತನೆ' ಮೆದುಳಿಗೆ ಮೇವನ್ನು ನೀಡಿತು. 'ರಸ ಮತ್ತು ನವರಸ ಪ್ರತಿಪಾದನೆ' ಕುರಿತು ವಿದುಷಿ ಮನೋರಮಾ ಬಿ.ಎನ್. ಪುತ್ತೂರು ಮತ್ತು 'ತೆಂಕುತಿಟ್ಟಿನಲ್ಲಿ ಆಂಗಿಕ-ಸಾತ್ವಿಕ ಅಭಿನಯ' ಕುರಿತು ವಿದುಷಿ ಸುಮಂಗಲಾ ರತ್ನಾಕರ್, ಮಂಗಳೂರು ಇವರು ವಿಚಾರ ಪ್ರಸ್ತುತಿ ಪಡಿಸಿದರು. ಸುಮಂಗಲ ಅವರು ಯಕ್ಷಗಾನದ ಕೆಲವು ನಡೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಮಿತ್ರ ಕೃಷ್ಣಪ್ರಕಾಶ್ ಉಳಿತ್ತಾಯರು ಹಿಮ್ಮೆಳ ಸಾಥ್ ನೀಡಿದರು.
- ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ವಹಿಸಿ, ಸಮಕಾಲೀನ ಯಕ್ಷಗಾನದ ನೃತ್ಯಗಾರಿಕೆಯತ್ತ ನೋಡ ಹರಿಸಿದರು. ತನಗೆ ಎಂಭತ್ತೆರಡು ವರುಷ ಎನ್ನುವುದನ್ನು ಮರೆತು ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ' ಎನ್ನುವ ಪದ್ಯಕ್ಕೆ ಕುಣಿದುಬಿಟ್ಟರು

No comments:

Post a Comment