Monday, December 29, 2014

ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ನೆನಪಿನ ಅಭಿನಂದನ ಕೃತಿ 'ಸಾರ್ಥಕ'

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ ಇವರ ಸಹಸ್ರಚಂದ್ರ ದರ್ಶನ ಸಮಾರಂಭ ನಿನ್ನೆ - 28-12-2014 - ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ‍್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಓಕುಣ್ಣಾಯರ ಜೀವನ ಗಾಥಾ 'ಸಾರ್ಥಕ' ಅಭಿನಂದನ ಕೃತಿ ಅನಾವರಣಗೊಂಡಿತು. ಪುಸ್ತಕದ ಮುಖಪುಟವನ್ನು ವಿನ್ಯಾಸಿಸಿದ್ದಾರೆ - ಆರ್ವಿ ಇಂಟರ್ ಗ್ರಾಫಿಕ್ಸ್ ಇದರ ಜ್ಞಾನೇಶ್. ಚಿತ್ರವನ್ನು ಕ್ಲಿಕ್ಕಿಸಿದವರು - ಮುರಳೀ ಕಲ್ಲೂರಾಯ, ಬೆಟ್ಟಂಪಾಡಿ. ಒಟ್ಟು ನೂರು ಪುಟಗಳು. ಸಂಪಾದಕ : ನಾ. ಕಾ. ಪೆ.

No comments:

Post a Comment