Monday, April 20, 2026
ʼಅಡ್ಕ ವಚೋಹಾಸʼ - ʼಅಪರಂಜಿʼ
ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥದಾರಿ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಇವರ ಅಭಿನಂದನಾ ಗ್ರಂಥ ʼಅಡ್ಕ ವಚೋಹಾಸʼವು 13-5-2016ರಂದು ಪ್ರಕಾಶಗೊಂಡಿತು. ಇವರ ಅಳಿಯ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ ಕೃತಿ ʼಅಪರಂಜಿʼಯು 19-4-2026ರಂದು ಬೆಳಕು ಕಂಡಿತು. ಎರಡು ಕೃತಿಗಳ ಸಂಪಾದಕನಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೃತಿಗಳ ಪ್ರಕಾಶನ ಸಂಸ್ಥೆ ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಒದಗಿಸಿದ್ದರು. ಎರಡೂ ಕೃತಿಗಳನ್ನು ಮೈತುಂಬಿಸಿದ ಯಕ್ಷಗಾನದ ಸಹೃದಯಿ ಹಿರಿಯರು, ಅಡ್ಕ ಹಾಗೂ ಪೆರಡಂಜಿ ಕುಟುಂಬಗಳ ಬಂಧುಗಳಿಗೆ ಕೃತಜ್ಞತೆಗಳು.
ಅಭಿನಂದನೆ ಪಡೆದ ಖುಷಿ.
ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಸಂಪಾದಕನಾಗುವ ಅವಕಾಶ ಪ್ರಾಪ್ತವಾಗಿತ್ತು. ಅನ್ಯಾನ್ಯ ಕಾರಣಗಳಿಂದ ಪ್ರಕಟಣೆಯ ಕಾರ್ಯಕ್ಕೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗಿತ್ತು. 19-4-2026ರಂದು ಕೃತಿ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಂಪಾದಕನ ನೆಲೆಯಲ್ಲಿ ಅಭಿನಂದನೆ ಪಡೆದ ಖುಷಿ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದ ಧನ್ಯತೆ. (ಚಿತ್ರಗಳು : ಶ್ರೀ ಗೋವಿಂದ ಬಳ್ಳಮೂಲೆ)
ಚಿತ್ರಕಲೆಯ ಸೊಗಸುಗಾರಿಕೆ.
ದಿನಾಂಕ 19-4-2026ರಂದು ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ದಶಮಾನ ಸಂಭ್ರಮದ ಸಮಾರಂಭ. ಈ ಸಂದರ್ಭದಲ್ಲಿ ಕು. ಶ್ರೀಲಕ್ಷ್ಮೀ ಕುಳೂರು ಇವರ ಚಿತ್ರಕಲೆಯ ಸೊಗಸುಗಾರಿಕೆ. ವೇದಿಕೆಯಲ್ಲಿ ಕು.ಸಾಧ್ವಿಕೃಷ್ಣ ವಯನಾಡು ಹಾಗೂ ಕು.ಅನ್ವಿತಾ ಪೆರಡಂಜಿ ಇವರ ಭರತನಾಟ್ಯದ ಹಿನ್ನೆಲೆಯ ಸಾಹಿತ್ಯಕ್ಕೆ ಅನುಸಾರವಾಗಿ ದಾರದ ಮೂಲಕ ಮೂಡಿಸಿದ ಚಿತ್ರ. ಹಿರಿಯ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಅವರ ಶಿಷ್ಯೆ. ಶ್ರೀಲಕ್ಷ್ಮೀಯವರ ಕಲೆಗೆ ಸಭಿಕರಿಂದ ಪ್ರಶಂಸೆಗಳ ಮಹಾಪೂರ.. ಅಭಿನಂದನೆಗಳು ಶ್ರೀಲಕ್ಷ್ಮೀ.
(ಚಿತ್ರ : ಶ್ರೀ ಗೋವಿಂದ
ಬಳ್ಳಮೂಲೆ)
Subscribe to:
Comments (Atom)




