ಗೋವಿಂದ ನಾಯಕ್ ಪಾಲೆಚ್ಚಾರು ಹಾಗೂ ಬಿ.ಸುಲೋಚನಾ ಅವರಿಗೆ
- ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವ ಪ್ರದಾನ
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು ಈಚೆಗೆ ಪುತ್ತೂರಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ಬಪ್ಪಳಿಗೆಯ 'ಅಗ್ರಹಾರ' ನಿವಾಸದಲ್ಲಿ ಜರುಗಿತು. (16-6-2023)
ಜಗನ್ನಿವಾಸರ ತೀರ್ಥರೂಪರಾದ ಗೋಪಾಲಕೃಷ್ಣಯ್ಯ ಅವರು ವಿಧಿವಶರಾಗಿ ಐವತ್ತು ವರುಷವಾಯಿತು. ಈ ನೆನಪಿಗಾಗಿ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಬಿ.ಸುಲೋಚನಾ ಅವರಿಗೆ 'ಗೋಪಣ್ಣ ಸ್ಮೃತಿ ವಿಶೇಷ ಗೌರವ' ಹಾಗೂ ಯಕ್ಷಗುರು ಗೋವಿಂದ ನಾಯಕ್ ಪಾಲೆಚ್ಚಾರು ಅವರಿಗೆ 'ಗೋಪಣ್ಣ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು.
ಗೌರವ ಸ್ವೀಕರಿಸಿದ ಸುಲೋಚನಾ ಅವರು ಮಾತನಾಡಿ “ಅಕ್ಷರ ಕಲಿಸಿದ ಗುರುವನ್ನು ನೆನಪಿಸಿ, ಸಂಮಾನಿಸುವ ಪರಿಪಾಠ ವರ್ತಮಾನಕ್ಕೊಂದು ಮಾದರಿ. ಈ ಇಳಿವಯಸ್ಸಿನಲ್ಲಿ ತುಂಬಾ ಖುಷಿ ತಂದಿದೆ” ಎಂದರು. ಕಲಾವಿದ ನಾ. ಕಾರಂತ ಪೆರಾಜೆ ಹಾಗೂ ಪಿ.ಜಿ.ಚಂದ್ರಶೇಖರ ರಾವ್ ಸಂಮಾನಿತರನ್ನು ನುಡಿಹಾರಗಳ ಮೂಲಕ ಅಭಿನಂದಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಹಾಗೂ ವೈಷ್ಣವಿ ರಾವ್ ಗುಣಕಥನ ಫಲಕ ವಾಚಿಸಿದರು.
ಪಿ.ಜಿ.ಜಗನ್ನಿವಾಸ ರಾವ್, ಶ್ರೀವಿದ್ಯಾ ಜೆ. ರಾವ್, ಪಿ.ಜಿ.ಚಂದ್ರಶೇಖರ ರಾವ್, ರತ್ನಕುಮಾರಿ ರಾವ್, ಶ್ರೀಕೃಷ್ಣ ರಾವ್, ಶ್ರೀಮತಿ ರೇವತಿ, ಶ್ರೀಮತಿ ಸುಜಾತ, ಶ್ರೀಮತಿ ಶಾಂತಾ ಹಾಗೂ ಮನೆಯವರು ಜತೆಸೇರಿ ಗೌರವಿಸಿದರು. ವೇದಿಕೆಯಲ್ಲಿ ಯಕ್ಷಗಾನ ಹಿಮ್ಮೇಳದ ಭಾಷಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಲಕ್ಷ್ಮೀಶ ಅಮ್ಮಣ್ಣಾಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
No comments:
Post a Comment