Wednesday, November 1, 2023

ತೆಂಕುತಿಟ್ಟಿನ ಹಿಮ್ಮೇಳಕ್ಕೆ ಗೌರವ ತಂದ ದಂಪತಿ

   

     ಶ್ರೀಯುತ ಕೆ.ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರದು ಯಕ್ಷಗಾನಕ್ಕೆ ಸಮರ್ಪಿತ ಬದುಕು. ತ್ಯಾಗದ ಮನಸ್ಥಿತಿ. ಹತ್ತಾರು ಮೇಳಗಳಲ್ಲಿ ಜತೆಯಾಗಿ ತಿರುಗಾಟ. ಬಯಲಾಟ, ಟೆಂಟ್ ಮೇಳಗಳ ಪ್ರದರ್ಶನಗಳಲ್ಲಿ ಸೋಲರಿಯದ ಛಾಪು. ಉದ್ದಾಮ ಪ್ರಾತಃಸ್ಮರಣೀಯರ ಜತೆ ಒಡನಾಟ. ಹಿರಿಯರ ಜ್ಞಾನವಲ್ಲರಿಯಲ್ಲಿ ಬೆಸೆದ ಕಲಾ ಯಾನ. ನೂರಾರು ಶಿಷ್ಯರನ್ನು ರೂಪುಗೊಳಿಸಿದ ಗುರುದಂಪತಿ. ಹಿಮ್ಮೇಳಕ್ಕೆ ಪಠ್ಯವನ್ನು ರೂಪಿಸಿದ ಮಹಾಗುರುಗಳು. ಪಠ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಧ್ವನಿಮುದ್ರಿತ ಅಡಕ ತಟ್ಟೆಯ ತಯಾರಿ. ರೂಪಿಸಿದ ಪಠ್ಯದಲ್ಲಿ ರಾಜಿಯಿಲ್ಲದ ಅನುಷ್ಠಾನ. ಯಕ್ಷಗಾನ ಪ್ರದರ್ಶನಗಳ ಮೂಲಕ ದೇಶ ಸುತ್ತಾಟ. ವಿವಿಧ ಪ್ರಶಸ್ತಿ-ಸಂಮಾನಗಳ ಬಾಗಿನ. ಯಕ್ಷಗಾನ ಕ್ಷೇತ್ರದಲ್ಲಿ ದೀರ್ಘಕಾಲ ದುಡಿದ 'ಯಕ್ಷದಂಪತಿ' ಎನ್ನುವ ನೆಗಳ್ತೆ. ಸೇವೆಯ ಸಾರ್ಥಕತೆಗೆ ಈಗ ಲೀಲಾವತಿ ಬೈಪಾಡಿತ್ತಾಯರಿಗೆ ಕನ್ನಾಡು ರಾಜ್ಯೋತ್ಸವ ಪ್ರಶಸ್ತಿಯ ಬಾಗಿನ.  ಅಭಿನಂದನೆಗಳು.

No comments:

Post a Comment