Monday, April 20, 2026
ʼಅಡ್ಕ ವಚೋಹಾಸʼ - ʼಅಪರಂಜಿʼ
ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥದಾರಿ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಇವರ ಅಭಿನಂದನಾ ಗ್ರಂಥ ʼಅಡ್ಕ ವಚೋಹಾಸʼವು 13-5-2016ರಂದು ಪ್ರಕಾಶಗೊಂಡಿತು. ಇವರ ಅಳಿಯ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ ಕೃತಿ ʼಅಪರಂಜಿʼಯು 19-4-2026ರಂದು ಬೆಳಕು ಕಂಡಿತು. ಎರಡು ಕೃತಿಗಳ ಸಂಪಾದಕನಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೃತಿಗಳ ಪ್ರಕಾಶನ ಸಂಸ್ಥೆ ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಒದಗಿಸಿದ್ದರು. ಎರಡೂ ಕೃತಿಗಳನ್ನು ಮೈತುಂಬಿಸಿದ ಯಕ್ಷಗಾನದ ಸಹೃದಯಿ ಹಿರಿಯರು, ಅಡ್ಕ ಹಾಗೂ ಪೆರಡಂಜಿ ಕುಟುಂಬಗಳ ಬಂಧುಗಳಿಗೆ ಕೃತಜ್ಞತೆಗಳು.
Subscribe to:
Post Comments (Atom)


No comments:
Post a Comment