Friday, October 22, 2010

ಯಕ್ಷಗಾನ ಭಾಗವತ ತಿಂಬರ ಗೋಪಾಲಕೃಷ್ಣ ಮಯ್ಯ

ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಮಂಗಲ್ಪಾಡಿ ತಿಂಬರ ಗೋಪಾಲಕೃಷ್ಣ ಮಯ್ಯರು ಅಕ್ಟೋಬರ್ 19ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.

ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಬಹುಕಾಲ ಸೇವೆ ಸಲ್ಲಿಸಿದ ಮಯ್ಯರು ಖ್ಯಾತ ಯಕ್ಷಗಾನ ಭಾಗವತರಾಗಿದ್ದರು. ತನ್ನ ಕಂಚಿನ ಕಂಠ ಮತ್ತು ಪ್ರಸಂಗದ ಹಿಡಿತಗಳಿಂದ ಅವರ ಭಾಗವತಿಕೆಯಲ್ಲಿ ಆಟಗಳು ಯಶಸ್ಸಾಗುತ್ತಿದ್ದುವು. ವೇಷಧಾರಿಯಾಗಿಯೂ ಅನುಭವ. ದಿ.ಕುಂಬಳೆ ಶೇಷಪ್ಪ ಅವರ ನೇತೃತ್ವದಲ್ಲಿದ್ದ ಉಪ್ಪಳ ಶ್ರೀ ಭಗವತಿ ಮೇಳಕ್ಕೆ ಬಹುಕಾಲ ಅವರ ಸೇವೆ ಸಲ್ಲಲ್ಪಟ್ಟಿತ್ತು. ಅಮ್ಟಾಡಿ ಮೇಳದಲ್ಲೂ ತಿರುಗಾಟ ಮಾಡಿದ್ದರು.

ತನ್ನ ಇಳಿ ವಯಸ್ಸಲ್ಲೂ ಸ್ಥಳೀಯ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕೆಂಬ ದೃಷ್ಟಿಯಿಂದ ಕೋಡಿಬೈಲು ಎಂಬಲ್ಲಿ ಶಾಲೆಯೊಂದನ್ನು ಆರಂಭಿಸಿದ ಹೆಗ್ಗಳಿಕೆ ಇವರದು. ಇವರ ಪತ್ನಿ ಜಯಲಕ್ಷ್ಮೀ ಮಯ್ಯ. ಮಂಗಲ್ಪಾಡಿ ಗ್ರಾಮ ಪಂಚಾಯತಿನ ಪ್ರತಾಪನಗರದ ಸದಸ್ಯೆ.

ಅಗಲಿದ ಚೇತನಕ್ಕೆ ಕಂಬನಿ. ಅಕ್ಷರ ನಮನ.

Monday, October 18, 2010

ಸಂಪಾಜೆ ಯಕ್ಷೊತ್ಸವಕ್ಕೆ ಇಪ್ಪತ್ತರ ಸಂಭ್ರಮ

ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಈಗ ಇಪ್ಪತ್ತರ ಹರುಷ. 6 ನವೆಂಬರ್ 2010, ಶನಿವಾರ ಪೂರ್ವಾಹ್ನ ಗಂಟೆ 10 ಕ್ಕೆ ಸಂಪಾಜೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಯಕ್ಷೊತ್ಸವದ ಶುಭಾರಂಭ.

ಘನ ಅಧ್ಯಕ್ಷತೆ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ
ಮಹಾಸ್ವಾಮಿಗಳವರು * ಆಶೀರ್ವಚನ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳವರು, ಶ್ರೀ ಪೇಜಾವರ ಮಠ, ದಿವ್ಯ ಉಪಸ್ಥಿತಿ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು, ಶ್ರೀ ಸುಬ್ರಹ್ಮಣ್ಯ ಮಠ.

ಅಭಿನಂದನೆ : ಖ್ಯಾತ ಜ್ಯೋತಿಷಿ ಶ್ರೀ ವಳಕ್ಕುಂಜ ವೆಂಕಟ್ರಮಣ ಭಟ್ಟರಿಗೆ.
ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ.
ಸಾವಯವ ಕೃಷಿ ತಜ್ಞೆ ಶ್ರೀಮತಿ ಸರವು ರತ್ನವೇಣಿ ರಾಮಭಟ್ ಇವರಿಗೆ

ಸಂಮಾನ : ಯಕ್ಷಗಾನ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ.

ಶೇಣಿ ಪ್ರಶಸ್ತಿ : ಯಕ್ಷಗಾನ ಅರ್ಥಧಾರಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ.

ವಿಂಶತಿ ಯಕ್ಷೊತ್ಸವ ಪ್ರಶಸ್ತಿ :* ವೇ.ಮೂ.ಪರಕಜೆ ಗಣಪತಿ ಭಟ್ * ವೇ.ಮೂ.ಉಡುಪಮೂಲೆ ಗೋಪಾಲಕೃಷ್ಣ ಭಟ್ * ಖ್ಯಾತ ಜ್ಯೋತಿಷಿ ವೇ.ಮೂ.ಬೇಳ ಪದ್ಮನಾಭ ಶರ್ಮ * ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ * ಶ್ರೀ ಸೂರಿಕುಮೇರು ಗೋವಿಂದ ಭಟ್ * ಶ್ರೀ ಮಂಟಪ ಪ್ರಭಾಕರ ಉಪಾಧ್ಯ

ಕಲಾಸಾಧಕ ಪ್ರಶಸ್ತಿ:* ಶ್ರೀ ಕುಂಬಳೆ ಸುಂದರ ರಾವ್, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ.

ವಿಂಶತಿತಮ ವಿದ್ವತ್ ಪ್ರಶಸ್ತಿ:
ಗೌರವಾನ್ವಿತರಾದ * ಪ್ರೊ: ಹೆರಂಜೆ ಕೃಷ್ಣ ಭಟ್ * ಪ್ರೊ: ಅಮೃತ ಸೋಮೇಶ್ವರ * ವೇ.ಮೂ.ಮಣಿಮುಂಡ ಮಹಾಲಿಂಗ ಉಪಾಧಾಯ * ವೇ.ಮೂ.ಉಚ್ಚಿಲ ಪದ್ಮನಾಭ ತಂತ್ರಿ * ಡಾ.ಎಂ.ಪ್ರಭಾಕರ ಜೋಶಿ * ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ * ವಿದ್ವಾನ್ ಕೆರೆಕೈ ಉಮಾಕಾಂತ ಭಟ್ * ವೇ.ಮೂ.ಪಳ್ಳತಡ್ಕ ವಿಶ್ವೇಶ್ವರ ಭಟ್ * ವಿದ್ವಾನ್ ಶಿಮಂತೂರು ನಾರಾಯಣ ಶೆಟ್ಟಿ * ಜ್ಯೋತಿಷಿ ಮಧೂರು ನಾರಾಯಣ ರಂಗಭಟ್ * ಜ್ಯೋತಿಷಿ ಚೇಕೋಡು ಸುಬ್ರಹ್ಮಣ್ಯ ಭಟ್ * ರಾಘವ ನಂಬಿಯಾರ್.

ವಿಂಶತಿತಮ ಕಲಾ ಸಾಧಕ ಪ್ರಶಸ್ತಿ:
ಶ್ರೀಗಳಾದ * ಅಗರಿ ರಘುರಾಮ ಭಾಗವತ * ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ * ತಲೆಂಗಳ ಗೋಪಾಲಕೃಷ್ಣ ಭಟ್ * ಗೋಪಾಲಕೃಷ್ಣ ಕುರೂಪ್ * ಮಾಂಬಾಡಿ ಸುಬ್ರಹ್ಮಣ್ಯ ಭಟ್ * ಕಡಂದೇಲು ಪುರುಷೋತ್ತಮ ಭಟ್ * ಪೆರುವೋಡಿ ನಾರಾಯಣ ಭಟ್ * ಮಿಜಾರು ಅಣ್ಣಪ್ಪ * ಸಕ್ಕಟ್ಟು ಲಕ್ಷ್ಮೀನಾರಾಯಣ * ಬಳ್ಳಂಬೆಟ್ಟು ಶೀನಪ್ಪ ಭಂಡಾರಿ * ಮಧೂರು ಗಣಪತಿ ರಾವ್ * ಮುಳಿಯಾಲ ಭೀಮ ಭಟ್ * ಹೊಸಹಿತ್ಲು ಮಹಾಲಿಂಗ ಭಟ್ * ಕೋಳ್ಯೂರು ನಾರಾಯಣ ಭಟ್ * ಮುಂಡ್ರುಕಜೆ ರಾಮಚಂದ್ರ ಭಟ್ * ಕುಡಾನ ಗೋಪಾಲಕೃಷ್ಣ ಭಟ್ * ಜಲವಳ್ಳಿ ವೆಂಕಟೇಶ ರಾವ್ * ಕುಂಜಾಲು ರಾಮಕೃಷ್ಣ * ಕೊಕ್ಕಡ ಈಶ್ವರ ಭಟ್ * ಪೆರುವಾಯಿ ನಾರಾಯಣ ಶೆಟ್ಟಿ.

ಅಭಿನಂದನಾ ಭಾಷಣ :
ಶ್ರೀ ಉಜಿರೆ ಅಶೋಕ ಭಟ್, ಶ್ರೀ ಜಿ.ಕೆ.ಭಟ್ ಸೇರಾಜೆ, ಉಡುವೆಕೋಡಿ ಸುಬ್ಬಪ್ಪಯ್ಯ, ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್.

ಈ ಸಂದರ್ಭದಲ್ಲಿ
- ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ಟರು ಹಾಡುಗಾರಿಕೆಯ ಧ್ವನಿಸುರುಳಿ ಬಿಡುಗಡೆ.* ಶ್ರೀ ತಾರಾನಾಥ ಬಲ್ಯಾರ ಅವರ 'ಕಬ್ಬಿನ ಕೋಲು' ಕೃತಿ ಬಿಡುಗಡೆ.

ಮಧ್ಯಾಹ್ನ 1 ಗಂಟೆಯಿಂದ ಮರುದಿವಸ ಸೂರ್ಯೋದಯದ ತನಕ
ತೆಂಕು-ಬಡಗು ಕಲಾವಿದರ ಸಮ್ಮಿಳನದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ -
ಬೇಡರ ಕಣ್ಣಪ್ಪ, ಸುಧನ್ವಾರ್ಜುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ