ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು 2010ನೇ ಸಾಲಿನ 'ಯಕ್ಷ ಕಲಾನಿಧಿ' ಪ್ರಶಸ್ತಿಗಾಗಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾವ್ ಮತ್ತು ಶ್ರೀ ಸೂರಿಕುಮೇರು ಗೋವಿಂದ ಭಟ್ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 16ರಂದು ನಡೆಯಲಿದೆ. ಪ್ರಶಸ್ತಿಯು ಹನ್ನೆರಡು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿತವಾಗಲಿದೆ. ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು ಕಳೆದ ಐದು ವರುಷಗಳಲ್ಲಿ ಶ್ರೀಗಳಾದ ಕಟೀಲು ಪುರುಶೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್ ಇವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು
Friday, July 23, 2010
Subscribe to:
Post Comments (Atom)
Both Kumble Sundara Rao and Surikumeru Govinda Bhat made Yakshagana a vibrant art form. Govinda Bhat excelled in all forms of Yakshagana and Kumble with his emotional dialogues made Yakshagana popular among common folks. Congratulations for the artists.
ReplyDeletevery nice to hear this. both are equally competitive ..
ReplyDelete