Saturday, October 29, 2011

ಉಡುಪಿ ಕಲಾರಂಗದ ಪ್ರಶಸ್ತಿ ಪ್ರಕಟ

ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಉಡುಪಿ ಕಲಾರಂಗದ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ' ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13, ಭಾನುವಾರದಂದು ಅಪರಾಹ್ನ ಗಂಟೆ 3-00ರಿಂದ 8-30ರ ತನಕ ರಾಜಾಂಗಣದಲ್ಲಿ ನಡೆಯಲಿದೆ.

ಈ ಸಾಲಿನ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ'ಯು ಯಕ್ಷಗಾನ ಕಲಾಕ್ಷೇತ್ರ, ಗುಂಡಿಬೈಲು, ಉಡುಪಿ ಇವರಿಗೆ ಪ್ರಾಪ್ತವಾಗಿದೆ.

ಇತರ ಪ್ರಶಸ್ತಿಗಳ ವಿವರ: ಶ್ರೀಗಳಾದ ಪುತ್ತೂರು ಶ್ರೀಧರ ಭಂಡಾರಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಬಾಬು ಕುಡ್ತಡ್ಕ (ನಿಟ್ಟೂರು ಸುಂದರ ಶೆಟ್ಟಿ ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಹಾಲಾಡಿ ಕೃಷ್ಣ (ಕುಷ್ಠ) ಗಾಣಿಗ (ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ), ಆನಂದ ಶೆಟ್ಟಿ, ಮಜ್ಜಿಗೆಬೈಲು (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಕೃಷ್ಣಯಾಜಿ ಇಡಗುಂಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹಳ್ಳದಾಚೆ ವೆಂಕಟರಾಮಯ್ಯ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಜಮದಗ್ನಿ ಶೀನ ನಾಯ್ಕ್ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಬಜ್ಪೆ ದೇರಣ್ಣ (ಶ್ರೀಮತಿ ಮತ್ತು ಶ್ರೀ ಹೆಚ್.ಆರ್.ಕೆದ್ಲಾಯ ಪ್ರಶಸ್ತಿ), ಮಂಜೇಶ್ವರ ಜನಾರ್ದನ ಜೋಗಿ (ಯು.ವಿಶ್ವನಾಥ ಶೆಣೈ ಪ್ರಶಸ್ತಿ), ಎಸ್.ಗೋಪಾಲಕೃಷ್ಣ (ಯಕ್ಷಚೇತನ ಪ್ರಶಸ್ತಿ)

ನವೆಂಬರ 13ರಂದು ಅಪರಾಹ್ನ ಗಂಟೆ 3-5ರ ತನಕ ಬಡಗು ತಿಟ್ಟಿನ 'ಸೈಂಧವ ವಧೆ' ಯಕ್ಷಗಾನ, 5ರಿಂದ ಸಭಾಕಾರ್ಯಕ್ರಮ, 6-30ರಿಂದ 8-30 ತೆಂಕು ತಿಟ್ಟಿನ 'ಮಹಿಷವಧೆ' ಯಕ್ಷಗಾನ ಬಯಲಾಟ.

No comments:

Post a Comment