Sunday, September 30, 2012

ಹಿರಿಯ ಕಲಾವಿದ ಅರುವ ನಾರಾಯಣ ಶೆಟ್ಟಿ ನಿಧನ



ತೆಂಕುತಿಟ್ಟು ಯಕ್ಷಗಾನದ ಹಿರಿಯ ಪಾತ್ರಧಾರಿ ಅರುವ ನಾರಾಯಣ ಶೆಟ್ಟಿ (Aruva narayana shetty) ಯವರು 19 ಸೆಪ್ಟೆಂಬರ್ 2012ರಂದು ರಂಗದಲ್ಲಿ ಶಿರ್ಲಾಲಿನಲ್ಲಿ 'ಶ್ರೀಕೃಷ್ಣ' ಪಾತ್ರದ ನಿರ್ವಹಣೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ದೈವಾಧೀನರಾದರು. ನಾರಾಯಣ ಶೆಟ್ಟಿಯವರು ಉತ್ತಮ ಕಲಾವಿದ, ಸಂಘಟಕ, ಪ್ರಸಂಗಕರ್ತ, ಅರ್ಥಧಾರಿ.

12 ಜೂನ್ 1954ರಲ್ಲಿ ಜನನ. ಬೆಳ್ತಂಗಡಿ ತಾಲೂಕು ಅಳದಂಗಡಿ ಮುತ್ತಣ್ಣ ಶೆಟ್ಟಿ, ಚೆಲುವಮ್ಮ ಹೆತ್ತವರು. ಪ್ರೌಢಶಾಲಾ ಕಲಿಕೆ. ಕೆ.ಗೋವಿಂದ ಭಟ್ ಮತ್ತು ಅರುವ ಕೊರಗಪ್ಪ ಶೆಟ್ಟರಿಂದ ಪ್ರೇರಣೆ-ಮಾರ್ಗದರ್ಶನ. ಕೌರವ, ರಾಮ, ಕೃಷ್ಣ, ಹರಿಶ್ಚಂದ್ರ, ಈಶ್ವರ, ಕೋಟಿ.. ಮೊದಲಾದ ಪಾತ್ರಗಳಲ್ಲಿ ಉತ್ತಮ ನಿರ್ವಹಣೆ.

ನಲವತ್ತೈದು ವರುಷಗಳ ಸೇವೆ. ಕಟೀಲು, ಪುತ್ತೂರು, ಬಪ್ಪನಾಡು, ಕದ್ರಿ ಮೇಳಗಳಲ್ಲಿ ತಿರುಗಾಟ. ಎಂಟು ವರುಷಗಳ ಕಾಲ 'ಅಳದಂಗಡಿ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ'ಯ ಯಜಮಾನ.

ಬದುಕಿನ ಕೊನೆಯ ವರುಷಗಳಲ್ಲಿ ಶ್ರವಣ ಶಕ್ತಿ ಕೈಕೊಟ್ಟಿತ್ತು. ಆದರೂ ಎದುರಾಳಿಯ, ಭಾಗವತರ ತುಟಿ ಸಂಚಲನಕ್ಕೆ ಭಾಷೆಯನ್ನು ಕೊಟ್ಟ ಅಪರೂಪದ ಕಲಾವಿದ.

No comments:

Post a Comment