Monday, October 15, 2012

ಮಾಧವ ಪೇತ್ರಿಯವರಿಗೆ ಡಾ. ಕಾರಂತ 'ಬಾಲವನ ಪ್ರಶಸ್ತಿ'


                   ಹಿರಿಯ ಕಲಾವಿದ ಉಡುಪಿ ಜಿಲ್ಲೆಯ ಎಚ್.ಮಾಧವ ಪೇತ್ರಿ(73)ಯವರಿಗೆ ಅಕ್ಟೋಬರ್ 10ರಂದು 'ಬಾಲವನ ಪ್ರಶಸ್ತಿ' ಪ್ರಾಪ್ತಿ. ಪುತ್ತೂರಿನ ಬಾಲವನದಲ್ಲಿ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ. ಪ್ರಶಸ್ತಿ ಮೊತ್ತ ಹತ್ತು ಸಾವಿರ ರೂಪಾಯಿ.

          ಪೇತ್ರಿಯವರು ಹದಿನಾಲ್ಕನೇ ವಯಸ್ಸಿನಿಂದಲೇ ಬಣ್ಣ ಹಚ್ಚಿದವರು. ಐವತ್ತೈದು ವರುಷಗಳ ತಿರುಗಾಟ. ಅದರಲ್ಲಿ ಮೂರು ದಶಕ ಕಾಲ ಡಾ. ಕಾರಂತರ ಒಡನಾಟ. ಅವರೊಂದಿಗೆ ದೇಶ ವಿದೇಶಗಳಿಗೆ ಹಾರಾಟ. ಬಣ್ಣದ ವೇಷಧಾರಿಯಾಗಿ ಖ್ಯಾತಿ.

          ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿ ಇವರ ಜಂಟಿ ಹೆಗಲೆಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪೇತ್ರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯ ಭಾಸ್ಕರ ಬಾರ್ಯ ಅಭಿನಂದನ ಭಾಷಣ ಮಾಡಿದರು. 

No comments:

Post a Comment