Wednesday, October 17, 2012

ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ


          ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಎರಡು ವರುಷಗಳ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ.
          2011-12: ಉಪ್ಪಿನಕುದ್ರು ವಾಮನ ಪೈ (ಯಕ್ಷಗಾನ ಗೊಂಬೆಯಾಟ), ಕುಡಾಣ ಗೋಪಾಲಕೃಷ್ಣ ಭಟ್ (ಯಕ್ಷಗಾನ), ಪೆರುವಾಯಿ ನಾರಾಯಣ ಶೆಟ್ಟಿ (ಯಕ್ಷಗಾನ), ಪೇತ್ರಿ ಮಾಧವ ನಾಯಕ್ (ಯಕ್ಷಗಾನ), ಹಳ್ಳದಾಚೆ ವೆಂಕಟ್ರಮಣಯ್ಯ ಮೂಡಿಗೆರೆ (ಯಕ್ಷಗಾನ), ಬಸವಣ್ಣಯ್ಯ ಮಠಪತಿ (ಶ್ರೀಕೃಷ್ಣ ಪಾರಿಜಾತ), ಅಡಿವಯ್ಯ ಎಸ್.ಹಿರೇಮಠ (ದೊಡ್ಡಾಟ), ರಾಮಚಂದ್ರಪ್ಪ ಅರ್ಕಸಾಲಿ (ಮೂಡಲಪಾಯ), ಡಾ.ರಮಾನಂದ ಬನಾರಿ (ತಾಳಮದ್ದಳೆ), ದೇವಕಾನ ಕೃಷ್ಣ ಭಟ್ (ಪ್ರಸಾಧನ)

             2012-13: ಇಡಗುಂಜಿ ಕೃಷ್ಣಯಾಜಿ (ಯಕ್ಷಗಾನ), ಕೆ.ಎಚ್.ದಾಸಪ್ಪ ರೈ (ಯಕ್ಷಗಾನ), ಪದ್ಯಾಣ ಶಂಕರನಾರಾಯಣ ಭಟ್ (ಯಕ್ಷಗಾನ), ದಯಾನಂದ ನಾಗೂರು (ಯಕ್ಷಗಾನ), ಹೊಳ ಬಸಯ್ಯ ಸಂಬಾಳದ (ಶ್ರೀಕೃಷ್ಣ ಪಾರಿಜಾತ), ಈರಮಾಳಪ್ಪ ಮಧುಗಿರಿ (ಮೂಡಲಪಾಯ), ವಿರೂಪಾಕ್ಷ ಅಂಗಡಿ (ಸಣ್ಣಾಟ), ಮುಕಾಂಬಿಕಾ ವಾರಂಬಳ್ಳಿ (ಮಹಿಳಾ ಯಕ್ಷಗಾನ), ವಿಶ್ವನಾಥ ಶೇಟ್ ಹಾರ್ಸಿಕಟ್ಟಾ (ಪ್ರಸಾಧನ), ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ (ಸಂಘಟನೆ).

            ಪ್ರಶಸ್ತಿ ಪ್ರದಾನ ಸಮಾರಂಭವು ದಶಂಬರ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗ ತಿಳಿಸಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ದಿನಾಂಕ 16-10-2012ರಂದು ಉಡುಪಿಯ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಯ ಆಯ್ಕೆ ನಡೆಯಿತು.

             ಅಕಾಡೆಮಿಯ ರಿಜಿಸ್ಟ್ರಾರ್ ಮೈಥಿಲಿ, ಸದಸ್ಯರಾದ - ಸರಪಾಡಿ ಅಶೋಕ ಶೆಟ್ಟಿ, ರಮೇಶ್ ಬೇಗಾರು, ಭಾಸ್ಕರ ಬಾರ್ಯ, ಉಜಿರೆ ಆಶೋಕ ಭಟ್, ಗೌರಿ ಸಾಸ್ತಾನ, ದುಗ್ಗಪ್ಪ ಯು, ಶ್ರೀಶೈಲ ಉದ್ದಾರ್, ಆಶೋಕ್ ಮೋದಿ, ಯಕ್ಷಗಾನ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಉಪಸ್ಥಿತಿ.

No comments:

Post a Comment