Saturday, November 10, 2012

ಉಡುಪಿ ಕಲಾರಂಗ ಪ್ರಶಸ್ತಿ ಪ್ರಕಟ

               ಕಲಾರಂಗ ಉಡುಪಿ ಇದರ 2012ರ ಪ್ರಶಸ್ತಿ ಪ್ರಕಟವಾಗಿದೆ. ಈ ಸಾಲಿನ ವಿಶ್ವೇಶತೀರ್ಥ ಪ್ರಶಸ್ತಿಯು ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರಕ್ಕೆ ಪ್ರಾಪ್ತವಾಗಿದೆ.

                 ಶ್ರೀಗಳಾದ - ಬೋಳಾರ ಸುಬ್ಬಯ್ಯ ಶೆಟ್ಟಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಭಟ್ಕಳದ ಕೊಪ್ಪದಮಕ್ಕಿ ಈರಪ್ಪ ಜಟ್ಟಿ ಭಾಗವತ (ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಪಡುಕೋಣೆಯ ಸುರೇಶ್ ಗಾಣಿಗ (ಪ್ರೊ:ಬಿ.ವಿ.ಆಚಾರ್ಯ ಪ್ರಶಸ್ತಿ), ಕುಂಬಳೆ ಶ್ರೀಧರ ರಾವ್ (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಜನ್ನಾಲೆ ವಿಶ್ವೇಶ್ವರ ಸೋಮಯಾಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹೆಮ್ಮಾಡಿ ರಾಮಚಂದನ್ (ಭಾಗವತ ವಾದಿರಾಜ ಹೆಬ್ಬಾರ್ ಪ್ರಶಸ್ತಿ), ಎಂ.ಕೆ.ರಮೇಶ್ ಆಚಾರ್ಯ (ಕೋಟ ವೈಕುಂಠ ಪ್ರಶಸ್ತಿ), ಬೆಲ್ತೂರು ರಮೇಶ್ ನಾಯ್ಕ್ (ಶಿರಿಯಾರ ನಾಯ್ಕ್ ಪ್ರಶಸ್ತಿ), ಕುಡಾನ ಗೋಪಾಲಕೃಷ್ಣ ಭಟ್ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಉದ್ಯಾವರ ಜಯಕುಮಾರ್ (ವಿಶ್ವಜ್ಞ ಶೆಟ್ಟಿ ಪ್ರಶಸ್ತಿ), ಬಿರ್ತಿ ಬಾಲಕೃಷ್ಣ ಗಾಣಿಗ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ಕರ್ಕಿ ಕೃಷ್ಣ ಹಾಸ್ಯಗಾರ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಎಂ.ಟಿ.ಎಸ್.ಕುಲಾಲ (ಶ್ರೀಮತಿ ಪ್ರಭಾವತಿ ವಿ.ಶೆಣೈ, ಯು.ವಿಶ್ವನಾಥ ಶೆಣೈ ಪ್ರಶಸ್ತಿ) ಮತ್ತು ಯಕ್ಷಚೇತನ ಪ್ರಶಸ್ತಿಗೆ ಯು.ಉಪೇಂದ್ರ - ಆಯ್ಕೆಯಾಗಿದ್ದಾರೆ.

                ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 18, ಭಾನುವಾರ, ಅಪರಾಹ್ನ ಗಂಟೆ 3 ರಿಂದ ರಾತ್ರಿ 9 ರ ತನಕ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ. ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.

                ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಶುಭಾಶಂಸನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಇವರು ವಾರ್ಶಿಕ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ:ಎಂ.ಎಲ್.ಸಾಮಗ ಮತ್ತು ಕಾಪು ಬಂಟರ ಯಾನೆ ನಾಡವರ ಸಂಘದ ಬಿ.ಸಚ್ಚಿದಾನಂದ ಶೆಟ್ಟಿ ಆಗಮಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ, ಉಪನ್ಯಾಸಕ ಡಾ.ಶ್ರೀಧರ ಉಪ್ಪೂರ ಅವರು ಡಾ.ಬಿ.ಬಿ.ಶೆಟ್ಟಿ ಸಂಸ್ಮರಣೆ ಮಾಡಲಿದ್ದಾರೆ.
             
             ಅಪರಾಹ್ನ ಗಂಟೆ 3 ರಿಂದ 5ರ ತನಕ 'ಸಂಗೀತ ಸಮನ್ವಯ' ಎಂಬ ವಿಶಿಷ್ಟ ಸಂಗೀತಾರಾಧನೆ. ಬಲಿಪ ನಾರಾಯಣ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಕುರಿಯ ಗಣಪತಿ ಶಾಸ್ತ್ರಿ, ತೋನ್ಸೆ ಜಯಂತ ಕುಮಾರ್ (ಯಕ್ಷಗಾನ), ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ (ಸಂಗೀತ). ಸಂಜೆ ಆರೂವರೆ ಬಳಿಕ 'ದಕ್ಷಯಕ್ಷ' ಪ್ರಸಂಗದ ಬಯಲಾಟ.

No comments:

Post a Comment