Monday, October 18, 2010

ಸಂಪಾಜೆ ಯಕ್ಷೊತ್ಸವಕ್ಕೆ ಇಪ್ಪತ್ತರ ಸಂಭ್ರಮ

ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಈಗ ಇಪ್ಪತ್ತರ ಹರುಷ. 6 ನವೆಂಬರ್ 2010, ಶನಿವಾರ ಪೂರ್ವಾಹ್ನ ಗಂಟೆ 10 ಕ್ಕೆ ಸಂಪಾಜೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಯಕ್ಷೊತ್ಸವದ ಶುಭಾರಂಭ.

ಘನ ಅಧ್ಯಕ್ಷತೆ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ
ಮಹಾಸ್ವಾಮಿಗಳವರು * ಆಶೀರ್ವಚನ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳವರು, ಶ್ರೀ ಪೇಜಾವರ ಮಠ, ದಿವ್ಯ ಉಪಸ್ಥಿತಿ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು, ಶ್ರೀ ಸುಬ್ರಹ್ಮಣ್ಯ ಮಠ.

ಅಭಿನಂದನೆ : ಖ್ಯಾತ ಜ್ಯೋತಿಷಿ ಶ್ರೀ ವಳಕ್ಕುಂಜ ವೆಂಕಟ್ರಮಣ ಭಟ್ಟರಿಗೆ.
ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ.
ಸಾವಯವ ಕೃಷಿ ತಜ್ಞೆ ಶ್ರೀಮತಿ ಸರವು ರತ್ನವೇಣಿ ರಾಮಭಟ್ ಇವರಿಗೆ

ಸಂಮಾನ : ಯಕ್ಷಗಾನ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ.

ಶೇಣಿ ಪ್ರಶಸ್ತಿ : ಯಕ್ಷಗಾನ ಅರ್ಥಧಾರಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ.

ವಿಂಶತಿ ಯಕ್ಷೊತ್ಸವ ಪ್ರಶಸ್ತಿ :* ವೇ.ಮೂ.ಪರಕಜೆ ಗಣಪತಿ ಭಟ್ * ವೇ.ಮೂ.ಉಡುಪಮೂಲೆ ಗೋಪಾಲಕೃಷ್ಣ ಭಟ್ * ಖ್ಯಾತ ಜ್ಯೋತಿಷಿ ವೇ.ಮೂ.ಬೇಳ ಪದ್ಮನಾಭ ಶರ್ಮ * ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ * ಶ್ರೀ ಸೂರಿಕುಮೇರು ಗೋವಿಂದ ಭಟ್ * ಶ್ರೀ ಮಂಟಪ ಪ್ರಭಾಕರ ಉಪಾಧ್ಯ

ಕಲಾಸಾಧಕ ಪ್ರಶಸ್ತಿ:* ಶ್ರೀ ಕುಂಬಳೆ ಸುಂದರ ರಾವ್, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ.

ವಿಂಶತಿತಮ ವಿದ್ವತ್ ಪ್ರಶಸ್ತಿ:
ಗೌರವಾನ್ವಿತರಾದ * ಪ್ರೊ: ಹೆರಂಜೆ ಕೃಷ್ಣ ಭಟ್ * ಪ್ರೊ: ಅಮೃತ ಸೋಮೇಶ್ವರ * ವೇ.ಮೂ.ಮಣಿಮುಂಡ ಮಹಾಲಿಂಗ ಉಪಾಧಾಯ * ವೇ.ಮೂ.ಉಚ್ಚಿಲ ಪದ್ಮನಾಭ ತಂತ್ರಿ * ಡಾ.ಎಂ.ಪ್ರಭಾಕರ ಜೋಶಿ * ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ * ವಿದ್ವಾನ್ ಕೆರೆಕೈ ಉಮಾಕಾಂತ ಭಟ್ * ವೇ.ಮೂ.ಪಳ್ಳತಡ್ಕ ವಿಶ್ವೇಶ್ವರ ಭಟ್ * ವಿದ್ವಾನ್ ಶಿಮಂತೂರು ನಾರಾಯಣ ಶೆಟ್ಟಿ * ಜ್ಯೋತಿಷಿ ಮಧೂರು ನಾರಾಯಣ ರಂಗಭಟ್ * ಜ್ಯೋತಿಷಿ ಚೇಕೋಡು ಸುಬ್ರಹ್ಮಣ್ಯ ಭಟ್ * ರಾಘವ ನಂಬಿಯಾರ್.

ವಿಂಶತಿತಮ ಕಲಾ ಸಾಧಕ ಪ್ರಶಸ್ತಿ:
ಶ್ರೀಗಳಾದ * ಅಗರಿ ರಘುರಾಮ ಭಾಗವತ * ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ * ತಲೆಂಗಳ ಗೋಪಾಲಕೃಷ್ಣ ಭಟ್ * ಗೋಪಾಲಕೃಷ್ಣ ಕುರೂಪ್ * ಮಾಂಬಾಡಿ ಸುಬ್ರಹ್ಮಣ್ಯ ಭಟ್ * ಕಡಂದೇಲು ಪುರುಷೋತ್ತಮ ಭಟ್ * ಪೆರುವೋಡಿ ನಾರಾಯಣ ಭಟ್ * ಮಿಜಾರು ಅಣ್ಣಪ್ಪ * ಸಕ್ಕಟ್ಟು ಲಕ್ಷ್ಮೀನಾರಾಯಣ * ಬಳ್ಳಂಬೆಟ್ಟು ಶೀನಪ್ಪ ಭಂಡಾರಿ * ಮಧೂರು ಗಣಪತಿ ರಾವ್ * ಮುಳಿಯಾಲ ಭೀಮ ಭಟ್ * ಹೊಸಹಿತ್ಲು ಮಹಾಲಿಂಗ ಭಟ್ * ಕೋಳ್ಯೂರು ನಾರಾಯಣ ಭಟ್ * ಮುಂಡ್ರುಕಜೆ ರಾಮಚಂದ್ರ ಭಟ್ * ಕುಡಾನ ಗೋಪಾಲಕೃಷ್ಣ ಭಟ್ * ಜಲವಳ್ಳಿ ವೆಂಕಟೇಶ ರಾವ್ * ಕುಂಜಾಲು ರಾಮಕೃಷ್ಣ * ಕೊಕ್ಕಡ ಈಶ್ವರ ಭಟ್ * ಪೆರುವಾಯಿ ನಾರಾಯಣ ಶೆಟ್ಟಿ.

ಅಭಿನಂದನಾ ಭಾಷಣ :
ಶ್ರೀ ಉಜಿರೆ ಅಶೋಕ ಭಟ್, ಶ್ರೀ ಜಿ.ಕೆ.ಭಟ್ ಸೇರಾಜೆ, ಉಡುವೆಕೋಡಿ ಸುಬ್ಬಪ್ಪಯ್ಯ, ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್.

ಈ ಸಂದರ್ಭದಲ್ಲಿ
- ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ಟರು ಹಾಡುಗಾರಿಕೆಯ ಧ್ವನಿಸುರುಳಿ ಬಿಡುಗಡೆ.* ಶ್ರೀ ತಾರಾನಾಥ ಬಲ್ಯಾರ ಅವರ 'ಕಬ್ಬಿನ ಕೋಲು' ಕೃತಿ ಬಿಡುಗಡೆ.

ಮಧ್ಯಾಹ್ನ 1 ಗಂಟೆಯಿಂದ ಮರುದಿವಸ ಸೂರ್ಯೋದಯದ ತನಕ
ತೆಂಕು-ಬಡಗು ಕಲಾವಿದರ ಸಮ್ಮಿಳನದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ -
ಬೇಡರ ಕಣ್ಣಪ್ಪ, ಸುಧನ್ವಾರ್ಜುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ

1 comment: