Friday, February 18, 2011

ಬದಿ ಕುಞಪ್ಪ ನಾಯ್ಕ - ನೆನಪು

ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಬದಿಯವರಾದ ಕುಞಪ್ಪ ನಾಯ್ಕ 16 ಫೆಬ್ರವರಿ 2011ರಂದು ನಿಧನರಾದರು. ಅವರಿಗೆ 85 ವರುಷ ವಯಸ್ಸು.
ಸುರತ್ಕಲ್, ಕೂಡ್ಲು, ಮೂಲ್ಕಿ, ಕೊಲ್ಲಂಗಾನ ಮೇಳಗಳಲ್ಲಿ ಯಕ್ಷಗಾನ ಕಲಾವಿದನಾಗಿ, ಪ್ರಸಾಧನ ಕಲಾವಿದನಾಗಿ ವ್ಯವಸಾಯ. ಪರಂಪರೆಯ 'ಕಿರಾತ' ಪಾತ್ರ ನಿರ್ವಹಣೆಯಲ್ಲಿ ಬದಿಯವರು ಖ್ಯಾತಿ. ಕಿರೀಟ ವೇಷಗಳಲ್ಲೂ ಸೋಲದ ಅಭಿವ್ಯಕ್ತಿ.
ಅವರ ಪುತ್ರ ಶ್ರೀಧರ ಪಡ್ರೆ ಮಂಗಳಾದೇವಿ ಮೇಳದಲ್ಲಿ ಚೆಂಡೆ-ಮದ್ದಳೆ ಕಲಾವಿದ. ರಾಮ ರೈಲ್ವೇ ಉದ್ಯೋಗಿ. ಬಾಲಕೃಷ್ಣ ಭೂಸೇನೆಯಲ್ಲಿ ಸೇವೆ. ಮೋಹನ ಹವ್ಯಾಸಿ ಕಲಾವಿದ.

No comments:

Post a Comment