Friday, February 18, 2011

ಕೋಳ್ಯೂರು ನಾರಾಯಣ ಭಟ್ - ನೆನಪು

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ವೇಷಧಾರಿ ಕೋಳ್ಯೂರು ನಾರಾಯಣ ಭಟ್ (80) ಫೆಬ್ರವರಿ 11, 2011ರಂದು ನಿಧನರಾದರು. ನಾರಾಯಣ ಭಟ್ಟರು ನಾಟ್ಯಾಚಾರ್ಯ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯ. ನಾಲ್ಕು ದಶಕಗಳ ರಂಗಸ್ಥಳ ದುಡಿಮೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುಂಕದಟ್ಟೆ ಮೇಳಗಳಲ್ಲಿ ತಿರುಗಾಟ. ತಮ್ಮ ಮೇಳವಾಸದಲ್ಲಿ ಕಾಲು ಶತಮಾನಗಳಷ್ಟು ಕಾಲ ಶ್ರೀ ಕಟೀಲು ಮೇಳವೊಂದರಲ್ಲೇ ಕಲಾವಿದನಾಗಿ ಮಿಂಚಿರುವುದು ಇವರ ಹೆಗ್ಗಳಿಕೆ. ರಂಗದಿಂದ ನಿವೃತ್ತನಾಗಿ ಹನ್ನೊಂದು ವರುಷ. ಬಾಲಗೋಪಾಲ ವೇಷದಿಂದ ಮೇಲೇರಿದ ಭಟ್; ಸೌದಾಸ, ಹಿರಣ್ಯಾಕ್ಷ, ಅರುಣಾಸುರ, ಮಕರಾಕ್ಷ, ಭಾನುಗೋಪ, ಜಾಬಾಲಿ.. ಮೊದಲಾದ ಪಾತ್ರಗಳು ಹೆಸರು ತಂದವುಗಳು. ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ..ಗಳಿಂದ ಸಂಮಾನಿತರು.

No comments:

Post a Comment