Thursday, January 15, 2015

'ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶನ

ಕೊಡೆಂಕಿರಿ ಉದಯಕುಮಾರ್-ಸ್ವಪ್ನ ದಂಪತಿಯ ಪುತ್ರ ಚಿ| ನಚಿಕೇತ ಬ್ರಹ್ಮೋಪದೇಶ ಸಮಾರಂಭದ ಪ್ರಯುಕ್ತ ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ಜನವರಿ 11ರಂದು 'ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶನ ಜರುಗಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಸತೀಶ ಪುಣಿಂಚಿತ್ತಾಯ, ರಮೇಶ ಭಟ್ ಪುತ್ತೂರು, ಶ್ರೀಧರ ಪಡ್ರೆ, ಜಗನ್ನಿವಾಸ ರಾವ್ ಪುತ್ತೂರು; ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ (ರಕ್ತಬೀಜ), ನಾ. ಕಾರಂತ ಪೆರಾಜೆ (ಶ್ರೀದೇವಿ), ಶಶಿಕಿರಣ ಕಾವು (ಶುಂಭ), ಲಕ್ಷ್ಮಣ ಕುಮಾರ್ ಮರಕಡ, ಗುಂಡಿಮಜಲು ಗೋಪಾಲ ಭಟ್ (ಚಂಡ-ಮುಂಡ), ಪೆರುವೋಡಿ ಸುಬ್ರಹ್ಮಣ್ಯ ಭಟ್ (ಹಾಸ್ಯ) ಮೊದಲಾದವರು ಭಾಗವಹಿಸಿದ್ದರು.



No comments:

Post a Comment