ಅವರು ಪುತ್ತೂರಿನ 'ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ' ಜರುಗಿದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು (Thalamaddale sapthaha) ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿ (30-6-2025) ಮಾತನಾಡುತ್ತಿದ್ದರು. ರಾಜಾ ಹಾಸ್ಯ ಬಿರುದಾಂಕಿತ ಕೀರ್ತಿಶೇಷ
ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಸಪ್ತಾಹವನ್ನು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ
ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಜಂಟಿಯಾಗಿ ಆಯೋಜಿಸಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಇದರ ಮ್ಹಾಲಕ ಶ್ರೀ
ಬಲರಾಮ ಆಚಾರ್ಯರು ವಹಿಸಿ ಮಾತನಾಡುತ್ತಾ, “ಯಕ್ಷಗಾನವೆಂಬುದು ವಿಶಿಷ್ಟ ಕಲಾ ಪ್ರಾಕಾರ. ಅಲ್ಲಿ ಉತ್ಪತ್ತಿಯಾಗುವ
ರಸ ಏನಿದೆಯೋ ಅದು ಜ್ಞಾನಸದೃಶ” ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ
ಮಠದ ಕಾರ್ಯದರ್ಶಿ ಶ್ರೀ ಯು. ಪೂವಪ್ಪ ಸಂದರ್ಭೋಚಿತವಾಗಿ ಮಾತನಾಡಿದರು.
ಕುರಿಯ ಪ್ರತಿಷ್ಠಾನದ ಸಂಚಾಲಕ ಶ್ರೀ ಉಜಿರೆ ಅಶೋಕ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಶ್ರೀಗಳಾದ ವೆಂಕಟರಾಮ ಭಟ್ ಸುಳ್ಯ, ಸ್ವಸ್ತಿಕ ಪದ್ಯಾಣ, ಅಶೋಕ ಸುಬ್ರಹ್ಮಣ್ಯ ಪೆರುವಡಿ, ರಮೇಶ ಭಟ್ ಪುತ್ತೂರು ಸಹಕರಿಸಿದರು. ಬಳಿಕ ಸಪ್ತಾಹದ ಮೊದಲ ತಾಳಮದ್ದಳೆ 'ತರಣಿಸೇನ ಕಾಳಗ' ಸಂಪನ್ನಗೊಂಡಿತು.