ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸ್ಮರಣಾರ್ಥ - ಪ್ರತೀವರ್ಷ ನೀಡುವ ಅಗರಿ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಮೊತ್ತ ಹತ್ತು ಸಾವಿರ ರೂಪಾಯಿ.
ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ಮತ್ತು ಸುರತ್ಕಲ್ಲಿನ ಯಕ್ಷಗಾನ-ಲಲಿತಕಲಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ದಶಂಬರ 28ರಂದು ಗೋವಿಂದದಾಸ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪರಿಚಯ: ಕೋಳ್ಯೂರು ರಾಮಚಂದ್ರ ರಾವ್ ಇವರ ಮೂಲಕ ಯಕ್ಷಲೋಕಕ್ಕೆ ಕಾಲಿರಿಸಿದ್ದ ನಾರಾಯಣ ಭಟ್, ದಿ.ಕುರಿಯ ವಿಠಲ ಶಾಸ್ತ್ರಿ ಮತ್ತು ಅಗರಿ ಶ್ರೀನಿವಾಸ ಭಾಗವತರ ಮಾರ್ಗದರ್ಶನದಲ್ಲಿ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು. ಐದು ದಶಕಗಳ ಕಾಲ ಧರ್ಮಸ್ಥಳ ಮೇಳ, ಕೂಡ್ಲು ಮೇಳ, ಕುಂಡಾವು, ಸುಂಕದಟ್ಟೆ, ವೇಣೂರು, ಕಟೀಲು ಮೇಳಗಳಲ್ಲಿ ತಿರುಗಾಟ.
ಭೀಮ, ವಾಲಿ, ಜಾಬಾಲಿ, ಶಿಶುಪಾಲ ಪಾತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡವರು. ಬಣ್ಣದ ವೇಶದಿಂದ ರಾಜವೇಷದ ತನಕ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲವರು. 79ರ ಹರೆಯದ ನಾರಾಯಣ ಭಟ್ ಪ್ರಸ್ತುತ ಸುರತ್ಕಲ್ಲಿನ ಚಿರಂತನ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ.
(ಕೃಪೆ : ಪ್ರಜಾವಣಿ/18 ದಶಂಬರ 2009)
Friday, December 18, 2009
Subscribe to:
Post Comments (Atom)
ಯಕ್ಶಲೊಕದ ಆಗುಹೊಗು ಗಳನ್ನು ದಾಖ್ಖಲಿಸುವುದು.
ReplyDeleteಮಾಹಿತಿ ನೀಡುವುದುಕೂಡಾ ಓಳ್ಳೆಯಕೆಲಸ.
ಆಸಕ್ತರಿಗೆ ಉಪಕಾರಿ.