Monday, December 29, 2014

ಪಾತಾಳರಿಗೆ 'ವಿದ್ಯಾಮಾನ್ಯ ಪ್ರಶಸ್ತಿ'

             ತೆಂಕುತಿಟ್ಟಿನ ಮೇರು ಕಲಾವಿದ ಶ್ರೀ ಪಾತಾಳ ವೆಂಕಟರಮಣ ಭಟ್ಟ್ ಇವರಿಗೆ ತ್ರತೀಯ ವರ್ಷದ ಶ್ರೀ ವಿದ್ಯಾಮಾನ್ಯ ಪ್ರಶಸ್ತಿಯನ್ನು ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದರು ಪ್ರದಾನ ಮಾಡಿದರು.
            
ಉಡುಪಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಕೃಷ್ಣಪ್ರಸಾದ್ , ಶ್ರೀ ರಾಮದಾಸ್ ಭಟ್ಟ್, ಶ್ರೀ ಹರಿ ಅಸ್ರಣ್ಣ , ಶ್ರೀ ಉಮೇಶ್ ಶೆಟ್ಟಿ ಉಬ್ಬರಡ್ಕ, ಯಕ್ಷರಂಗಸ್ಥಳ ಸಂಸ್ಥೆಯ ಗೌರವ ಉಪಾಧ್ಯಕ್ಷ ಶ್ರೀ ಸತೀಶ್ ರಾವ್, ಅಧ್ಯಕ್ಷ ಶ್ರೀ ಪಟ್ಟಾಭಿರಾಮ ಆಚಾರ್ಯ ಉಪಸ್ಥಿತರಿದ್ದರು.

No comments:

Post a Comment