Thursday, April 8, 2010

ಪುತ್ತೂರು ನಾರಾಯಣ ಹೆಗಡೆ ಸಂಸ್ಮರಣೆ - ಪ್ರಶಸ್ತಿ ಪ್ರದಾನ

ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ 'ಖಳ' ಕಲಾವಿದ ಪುತ್ತೂರು ನಾರಾಯಣ ಹೆಗಡೆಯವರು ಕಾಲವಾಗಿ ಹತ್ರಹತ್ರ ಎರಡು ದಶಕಗಳಾದುವು. ಅವರ ಹೆಸರಿನಲ್ಲಿ 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಸ್ಥಾಪನೆಯಾಗಿದೆ. ಅವರ ಚಿರಂಜೀವಿಗಳು ಪ್ರತಿಷ್ಠಾನ ಮೂಲಕ ವರುಷಕ್ಕೊಬ್ಬ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಸಲದ ಮೊದಲ 'ಪುತ್ತೂರು ಹೆಗಡೆ ಪ್ರಶಸ್ತಿ' - 'ತನ್ನ ಪಾತ್ರಗಳಿಗೆ ಜೀವಕಳೆ ತುಂಬಿದ' ಕಡತೋಕ ಮಂಜುನಾಥ ಭಾಗವತರಿಗೆ. ಎಪ್ರಿಲ್ 11, 2010ರಂದು ಸಂಜೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಸನಿಹ ನಡೆಯುವ ಶ್ರೀ ಧರ್ಮಸ್ಥಳ ಮೇಳದ ಬಯಲಾಟದ ರಂಗದಲ್ಲಿ ಪ್ರಶಸ್ತಿ ಪ್ರದಾನ.

No comments:

Post a Comment